Slide
Slide
Slide
previous arrow
next arrow

ಇಂದು ಮೀನುಗಾರರ ಸಂಘಟನೆಯ ಉದ್ಘಾಟನೆ, ರಾಜ್ಯೋತ್ಸವ ಆಚರಣೆ

300x250 AD

ಅಂಕೋಲಾ : ದಿನಾಂಕ : 01-11-2022 ಕರ್ನಾಟಕ ರಾಜ್ಯೋತ್ಸವ ದಿನದಂದು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಶ್ರೀ ಮಹಾಗಣಪತಿ ದೇವಸ್ಥಾನ ಸಭಾಭವನ ಕೆ.ಸಿ. ರಸ್ತೆ ಅಂಕೋಲಾದಲ್ಲಿ ನೂತನ ಪುನರ್ ಸಂಘಟಿತ ಮೀನುಗಾರರ ಸಂಘಟನೆ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮತ್ತು ನೂತನ ಸಂಘಟನೆ ಉದ್ಘಾಟನಾ ಸಮಾರಂಭ ಹಾಗೂ ಮೀನುಗಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮವನ್ನು ಉದಯ ಕುಂಬಾರ ಮಾನ್ಯ ತಹಸೀಲ್ದಾರ ಅಂಕೋಲಾ ಇವರು ಉದ್ಘಾಟಿಸಲಿದ್ದು, ಸಂಘಟನೆಯ ಅನಾವರಣವನ್ನು ರಾಜು ಎಲ್. ತಾಂಡೇಲ್ ಅಧ್ಯಕ್ಷರು ಮೀನು ಮಾರಾಟ ಫೆಡರೇಶನ್ ಕಾರವಾರ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಹರಿಹರ ಹರಿಕಾಂತ ಹಿಲ್ಲೂರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಾಲಕ್ಕಿ ಸಮಾಜದ ಅಧ್ಯಕ್ಷ ಹನಮಂತ ಬಿ. ಗೌಡ, ನಾಡವರ ಸಂಘದ ಅಧ್ಯಕ್ಷ ಆರ್.ಟಿ.ಮಿರಾಶಿ, ನಾಮಧಾರಿ ಆರ್ಯ ಈಡಿಗ ಸಮಾಜದ ಅಧ್ಯಕ್ಷ ನಾಗೆಶ ನಾಯ್ಕ, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಣೇಶ ಉಪೇಂದ್ರ ಕುಡ್ತಳಕರ, ಕರವೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಹನಿಫ್ ಸಾಬ್, ಮೀನುಗಾರರ ಮುಖಂಡ ಜೈವಿಠ್ಠಲ ಕುಬಾಲ್ ಕುಮಟಾ, ಹೂವಾ ಖಂಡೇಕರ ಅಂಕೋಲಾ, ಭಾಸ್ಕರ ಮೊಗೇರ ಭಟ್ಕಳ, ಜಗದೀಶ ತಾಂಡೇಲ್ ಹೊನ್ನಾವರ ಉಪಸ್ಥಿತರಿರುವರು. ಸರ್ವರಿಗೂ ಆದರದ ಸ್ವಾಗತವನ್ನು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top